ಹುಚ್ಚು ಕನಸಿನ ತುಣುಕು

 

image from: google images

 

 

 

 

 

 

 

ಹೊಳೆಯಿಲ್ಲ ಬೆಳೆಯಿಲ್ಲ ಸಾಗರವೂ ಬಹುದೂರ

ಗುಡ್ಡಗಳೇ ಕ್ಷಿತಿಜವು ಎಲ್ಲ ಕಡೆಗೆ

ದಿಕ್ಕುಗಳು ನೆರೆಬಂದು ದುಂಡಗೆ ಮೈಚೆಲ್ಲಿ

ನೋಡನಿಂತಿವೆ ಉರಿಶಿಶ್ನದೆಡೆಗೆ

 

ಕಾಲವೆನ್ನುವೆಯೋ ನಿರಾಕಾರವೆನ್ನುವೆಯೋ

ಸಮ್ರಾಟ ಬಯಸಿದ ಉನ್ಮತ್ತ ಸ್ಥಿತಿಯೋ

ಮೂಲದಲಿ ಮಾನವನ ಕಾಲಡಿಯ ಹಾದಿ

ಏರಿದರೆ ಏರುವೀ ಏರಿ ದೇವಗಿರಿಯೋ

 

ಹಳ್ಳಿಹೊಲಗಳು ಬಂಜೆ ಕಲ್ಲುಬಯಲುಗಳು ಸುತ್ತ

ಉಬ್ಬಸದ ಹೆದ್ದಾರಿ ಹಿಡಿದು ಔರಂಗಾಬಾದು

ಅಲ್ಲಿಂದ ಮುಂದುಂಟು ಎಲ್ಲೋರಾ, ಅಜಂಠಾ

ವಿಪರೀತಗಳ ನಡುವೆ ಇದು ದಿವ್ಯ ಬೀಡು

 

ನೋಟ ನಿಲುಕದು, ಮಾಟ ನಿಲುಕದು, ಮಾತಿಗೋ ಇಲ್ಲೆಇಲ್ಲ

ಹತ್ತಿ ದುರ್ಗಮ ಕೋಟೆ ಕಾಲು ಕಂಗಾಲು

ಅವಶೇಷಗಳನು ಬಿಟ್ಟು ಮುಂದೆನಡೆದು ನೋಡಿದರೆ

ಅಡಿಯ ಕಂದಕದಿಂದೆದ್ದ ಗೋಡೆ ಕಡೆದಿಟ್ಟ ಕಲ್ಲು

 

ಬಿಲ್ಲೆ ಮೇಲಿನ ಮೊಹರು ಕತ್ತಿಅಲುಗಿನ ಸೃಷ್ಟಿ

ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ

ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ

ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ

 

ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ

ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು

ಮುಠ್ಠಾಳ ತುಘಲಕನ ಅತಿಬುದ್ದಿಯ ಕಥೆ

ಹುಚ್ಚು ಕನಸಿನ ತುಣುಕು ದೌಲತಾಬಾದು

— ಕಮಲಾಕರ ಕಡವೆ (ಚೂರುಪಾರು  ರೇಷಮೆ)

 

image form: google images

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s